ಟ್ರೆಂಡಿಂಗ್

ಮನೆಯಲ್ಲಿ ಕಳ್ಖಭಟ್ಟಿ ತಯಾರಿಕೆ: ಅಬಕಾರಿ ಅಧಿಕಾರಿಗಳ ದಾಳಿ

ಕುಶಾಲನಗರ, ಡಿ 07: ಸೋಮವಾರಪೇಟೆ ತಾಲ್ಲೂಕಿನ ಕಣಿವೆ ಬಸವನಹಳ್ಳಿ ಗ್ರಾಮದ ಉಣ್ಣಿ ಕೃಷ್ಣನ್ ಎಂಬಾತನ ಮನೆ ಹಾಗೂ ಕಾಫಿ ತೋಟಕ್ಕೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ 10 ಲೀಟರ್ ಕಳ್ಳಭಟ್ಟಿ ಸಾರಾಯಿ, 35 ಲೀಟರ್ ಬೆಲ್ಲದ ಪುಳಿಗಂಜಿ ಮತ್ತು ಡಿಸ್ಟಿಲರಿ ಸೆಟ್ ಗಳನ್ನು ವಶಕ್ಕೆ ಪಡೆದು ಸದರಿ ವ್ಯಕ್ತಿಯ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ವಲಯ ಕಚೇರಿಯ ಅಬಕಾರಿ ನಿರೀಕ್ಷಕ ಲೋಕೇಶ್ ಬಿ.ಎಸ್, ಉಪ ನಿರೀಕ್ಷಕಿ ಸುಮತಿ ಕೆ.ವಿ, ಅಬಕಾರಿ ಹೆಡ್ ಕಾನ್ಸ್ಟೇಬಲ್
ವೀರೇಶ್ ಕುಮಾರ್, ಕಾನ್ಸ್ಟೇಬಲ್
ಮಹಾಂತೇಶ್ ಎಸ್ ಮತ್ತು ವಾಹನ ಚಾಲಕ ಮಧು ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!