ಕುಶಾಲನಗರ, ನ 19: ಕುಶಾಲನಗರ ತಾಲೂಕಿನ ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯ ತೊಂಡೂರು ಗ್ರಾಮದ ಅರಣ್ಯದಂಚಿನಲ್ಲಿ ಸಿಮೆಂಟ್ ಬ್ಯಾರಿಕೆಡ್ ಗೆ ಕಾಡಾನೆ ಸಿಲುಕಿ ನರಳಾಡಿದ ಘಟನೆ ನಡೆದಿದೆ.
ಶುಕ್ರವಾರ ಸಂಜೆ ವೇಳೆ ಅರಣ್ಯದಿಂದ ಬಂದ ಹೆಚ್ಚು ಕಾಡಾನೆ ಬ್ಯಾರಿಕೆಡ್ ಒಳಗಿನಿಂದ ನುಸುಳಲು ಯತ್ನಿಸಿ ಸಿಲುಕಿಕೊಂಡಿದೆ. ಮಾಹಿತಿ ದೊರೆತ ಅರಣ್ಯ ಇಲಾಖೆಯವರು ಕಾಡಾನೆಯ ಬಂಧಮುಕ್ತಗೊಳಿಸಿ ಅರಣ್ಯಕ್ಕೆ ಅಟ್ಟಿದ್ದಾರೆ.
ಜೆಸಿಬಿ ಬಳಸಿ ರಕ್ಷಣೆಗೆ ಮುಂದಾದ ಸಂದರ್ಭ ಕಾಡಂಚಿನಲ್ಲಿ ಇದ್ದ ಈ ಹೆಣ್ಣಾನೆ ಸಂಗಡಿಗರು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ಮೇಲೆ ದಾಳಿಗೆ ಮುಂದಾಗುತ್ತಿದ್ದವು. ಸಿಲುಕಿಕೊಂಡ ಹೆಣ್ಣಾನೆ ಕೂಡ ಕಾಲ ಕಳೆದಂತೆ ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಿತ್ತು. ಅಂತಿಮ ಮಾರ್ಗ ಎಂಬಂತೆ ಧೈರ್ಯ ಮಾಡಿದ ಸಿಬ್ಬಂದಿಗಳು 4 ಟಿನ್ ಸನಪ್ಯೂರ್, ಏರಿಯಲ್ ಸರ್ಫ್ ನೀರನ್ನು ಅನೆಯ ಬೆನ್ನ ಮೇಲೆ ಸುರಿದು ನುಸುಳಲು ಅನುಕೂಲವಾಗುವಂತೆ ಪ್ರಯತ್ನ ಮಾಡಿದರು. ಇದು ಕೂಡ ಸಫಲವಾಯಿತು. ಬಂಧ ಬಿಡಿಸಿಕೊಂಡ ಹೆಣ್ಣಾನೆ ನೆರೆದಿದ್ದವರ ಮೇಲೆ ದಾಳಿಗೆ ಮುಂದಾಗಿ ಬಳಿಕ ಅರಣ್ಯ ಸೇರಿತು.
ವಲಯ ಅರಣ್ಯಾಧಿಕಾರಿ ಶಿವರಾಂ, ಡಿಆರ್ಎಫ್ಒ ಗಳಾದ ರಂಜನ್, ಅನಿಲ್ ಡಿಸೋಜ, ಸುಬ್ರಾಯ, ದೇವಯ್ಯ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
Back to top button
error: Content is protected !!