ಕ್ರೀಡೆ
ಹಾಕಿ ಪಂದ್ಯಾಟ: ಅನುಗ್ರಹ ಕಾಲೇಜು ತಂಡ ಜಿಲ್ಲಾಮಟ್ಟಕ್ಕೆ

ಕುಶಾಲನಗರ, ಸೆ 06: ಕೂಡಿಗೆಯಲ್ಲಿ ನಡೆದ ಸೋಮವಾರಪೇಟೆ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಹಾಕಿ ಪಂದ್ಯಾಟದಲ್ಲಿ ಕುಶಾಲನಗರದ ಅನುಗ್ರಹ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಂಡ 4-0 ಅಂತರದಲ್ಲಿ ಕೂಡಿಗೆಯ ಸರ್ಕಾರಿ ಪದವಿಪೂರ್ವ ಕಾಲೇಜು ತಂಡವನ್ನು ಮಣಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು.
ಈ ಸಂದರ್ಭ ಅನುಗ್ರಹ ಕಾಲೇಜಿನ ಪ್ರಾಂಶುಪಾಲರಾದ ಪಂಡರಿನಾಥ್ ನಾಯ್ಡು, ಉಪನ್ಯಾಸಕ ನೌಶಾದ್ ಮತ್ತು ದೈಹಿಕ ಶಿಕ್ಷಕ ಅಭಿಷೇಕ್ ಇದ್ದರು.



