ಕಾರ್ಯಕ್ರಮ

ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಕುಶಾಲನಗರದಲ್ಲಿ ಬೃಹತ್ ವಾಹನ ಜಾಥಾ

ಕುಶಾಲನಗರ, ಆ 15: ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಆಶ್ರಯದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಬೃಹತ್ ವಾಹನ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಗುಡ್ಡೆಹೊಸೂರಿನಿಂದ ಕುಶಾಲನಗರದ ತನಕ ನಡೆದ ವಾಹನ ಜಾಥಾಗೆ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಚಾಲನೆ‌ ನೀಡಿದರು. ನೆರೆದಿದ್ದವರು‌ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿ ಜಾಥಾದಲ್ಲಿ ಪಾಲ್ಗೊಂಡರು.
ಜಿಲ್ಲಾ ಬಿಜೆಪಿ ಅ ರವಿ ಕಾಳಪ್ಪ,‌ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ನವನೀತ್, ಕಾರ್ಯದರ್ಶಿ ರಕ್ಷಿತ್ ಮಾವಜಿ, ಮಂಡಲ ಅಧ್ಯಕ್ಷ ಗೌತಮ್, ಪ್ರಮುಖರಾದ
ಸುಮನ್, ಸಚಿನ್, ಎಂ.ಡಿ.ಕೃಷ್ಣಪ್ಪ, ಪ್ರವೀಣ್ ಮಲ್ಲಜಿರ, ದರ್ಶನ್ ಕಾರ್ಯಪ್ಪ, ‌ಮೋಹಿತ್ ತಿಮ್ಮಯ್ಯ, ಇಂದಿರಾ ರಮೇಶ್, ಭಾಸ್ಕರ್ ನಾಯಕ್, ಅನುದೀಪ್ ಮತ್ತಿತರರು ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!