ದೇವಾಲಯ

ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಪುತ್ತರಿ ವೆಳ್ಳಾಟಂ

ಕುಶಾಲನಗರ, ನ 09: ಕುಶಾಲನಗರದ ಬೈಚನಹಳ್ಳಿಯಲ್ಲಿ ಇರುವ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಶನಿವಾರ ಸಂಜೆ ಪುತ್ತರಿ ವೆಳ್ಳಾಟಂ ಶ್ರದ್ದಾಭಕ್ತಿಯಿಂದ ನಡೆಯಿತು. ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಿಂದ ಆಗಮಿಸಿದ್ದ ಭಕ್ತರು ಮುತ್ತಪ್ಪ ಸ್ವಾಮಿಯ ವೆಳ್ಳಾಟಂ ಕಣ್ತುಂಬಿಸಿಕೊಂಡರು. ವೆಳ್ಳಾಟಂ ನಂತರ ಭಕ್ತರು ಮುತ್ತಪ್ಪ ಸ್ವಾಮಿ ಬಳಿ ತಮ್ಮ ಕಷ್ಟ-ಸುಖ ಹಂಚಿಕೊಂಡು ಪರಿಹಾರ ಪಡೆದುಕೊಂಡು ಕೃತಾರ್ಥರಾದರು. ಕಾರ್ಯಕ್ರಮದ ನಂತರ ಸೇರಿದ್ದ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ
ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ವರದ, ಕಾವೇರಿ ನದಿ ದಡದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಪ್ರತಿ ವರ್ಷವೂ ನಡೆಸಲಾಗುತ್ತಿರುವ ಶ್ರೀ ಮುತ್ತಪ್ಪ, ತಿರುವಪ್ಪ ವೆಳ್ಳಾಟ ಹಾಗೂ ಪುತ್ತರಿ ವೆಳ್ಳಾಟಂ ಮತ್ತು ವಾರಕ್ಕೊಮ್ಮೆ ಪಯಂಗುತ್ತಿ ಸೇವೆ ದೇವರಿಗೆ ಮಾಡಿಸಲಾಗುತ್ತಿದೆ. ಈಚೆಗೆ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಭಕ್ತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ದೇವಾಲಯದ ಎದುರಿನ ನಿವೇಶನ ಖರೀದಿಸಲಾಗುತ್ತಿದೆ. ಇದಕ್ಕೆ ಭಕ್ತರು ದೇಣಿಗೆ ನೀಡುವ ಮೂಲಕ ದೇವಾಲಯದ ಅಭಿವೃದ್ದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಉಪಾಧ್ಯಕ್ಷ ವಿ. ಬೋಬಿ, ಎಂ. ಹರೀಂದ್ರನ್, ಪ್ರಧಾನ ಕಾರ್ಯದರ್ಶಿ ಕೆ.ಕೆ. ದಿನೇಶ್, ಸಹಕಾರ್ಯದರ್ಶಿ ಎಂ.ಡಿ. ರಂಜಿತ್ ಕುಮಾರ್, ಖಜಾಂಚಿ ಎ.ಕೆ. ಶೇಖರನ್, ರಕ್ಷಾಧಿಕಾರಿ ಕೆ.ಎಂ. ಹರೀಂದ್ರನ್, ಆಡಳಿತ ಮಂಡಳಿ ಸದಸ್ಯರಾದ ರಂಜಿತ್ ಕುಮಾರ್ ಎಂ.ಡಿ., ವಿಮಲ್ ನಾಯರ್, ರಾಜೇಶ್ ಟಿ.ಎನ್., ವಿನುಕಮಲ್, ಸಂದೀಪ್ ಸಿ.ಆರ್., ನರೇಶ್ ಕುಮಾರ್ ಎನ್.ಎಸ್., ಮಣಿಕಂಠ ಎಂ.ಎಸ್. ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!