ಮಳೆ
ಚಿಕ್ಲಿಹೊಳೆ-ಮಾವಿನಹಳ್ಳ ನಡುವೆ ಕಿರು ಸೇತುವೆ ತಡೆಗೋಡೆ ಕುಸಿತ: ಪರಿಶೀಲನೆ


ಕುಶಾಲನಗರ, ಮೇ 26: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಮಾವಿನಹಳ್ಳ ಹಾಡಿಗೆ ಹೋಗುವ ಕಿರು ಸೇತುವೆ ತಡೆಗೋಡೆಯು ಭಾರಿ ಮಳೆ ಗಾಳಿಗೆ ಒಂದು ಭಾಗ ಸಂಪೂರ್ಣ ಕುಸಿದಿದೆ. ಇದರಿಂದ ಈ ಭಾಗದ ಹಾಡಿ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ದಿನನಿತ್ಯ ಆತಂಕದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.