ಕುಶಾಲನಗರ, ಮೇ 16: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕ ದಿಂದ ವಿದ್ಯುತ್ ಶಕ್ತಿ ಯನ್ನು ಖಾಸಗೀಕರಣ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚೆಸ್ಕಾಂ ಕುಶಾಲನಗರ ಕಾರ್ಯಪಾಲಕ ಅಭಿಯಂತರರಿಗೆ ಕೊಡಗು ಜಿಲ್ಲಾಧ್ಯಕ್ಷ ಶರತ್ ಕುಮಾರ್ ನೇತೃತ್ವದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸೇನೆಯ
ಗೌರವಾಧ್ಯಕ್ಷ ಕಾಂಗ್ರೆಸ್ ಚಂದ್ರಣ್ಣ, ಉಪಾಧ್ಯಕ್ಷ ಪ್ರಸನ್ನ ರೆಡ್ಡಿ, ಕಾರ್ಯದರ್ಶಿ ಪ್ರಜ್ವಲ್, ಹೆಬ್ಬಾಲೆ ಘಟಕದ ಅಧ್ಯಕ್ಷ ಬಾಂಬೆ ಪುಟ್ಟು, ಕಮ್ಮರಳ್ಳಿ ಆನಂದ, ಹೆಬ್ಬಾಲೆ ಅಪ್ಪಣ್ಣಿ, ಮಂಜುನಾಥ್ ಮುಂತಾದ ರೈತ ಪದಾಧಿಕಾರಿಗಳು ಭಾಗವಹಿಸಿದ್ದರು.
Back to top button
error: Content is protected !!