ಅರಣ್ಯ ವನ್ಯಜೀವಿ

ಸೀಗೆಹೊಸೂರು ಗ್ರಾಮದಲ್ಲಿ ರಾಸುಗಳ ಮೇಲೆ ಚಿರತೆ ದಾಳಿ

ಕುಶಾಲನಗರ, ಜ 17: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಚಿರತೆ ದಾಳಿಯಿಂದ ಹಸು ಹಾಗೂ ಕರು ಗಾಯಗೊಂಡ ಘಟನೆ‌ ನಡೆದಿದೆ.
ಪ್ರಕಾಶ್ ಎಂಬುವರಿಗೆ ಸೇರಿದ ಹಸು ಮತ್ತು ಕರು ಕಾಡಂಚಿನಲ್ಲಿ ಮೇಯಲು ಹೋದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ‌
ಚಿರತೆ ದಾಳಿಯಿಂದ ಹಸುವಿನ ತೊಡೆಯ ಹಾಗೂ ಕರುವಿನ ಕುತ್ತಿಗೆಯ ಭಾಗಕ್ಕೆ ಗಾಯವಾಗಿದೆ. ಪ್ರಕಾಶ್ ಅವರ ಮಾಹಿತಿ ಮೇರೆಗೆ ಪಶುಪಾಲನಾ ಇಲಾಖೆಯ ಸಿಬ್ಬಂದಿಗಳು ಚಿಕಿತ್ಸೆ ನೀಡಿದ್ದಾರೆ.
ಸ್ಥಳಕ್ಕೆ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಅನಂತ್, ಜಯಶೀಲಾ, ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!