ಕುಶಾಲನಗರ, ಸೆ. 9: ಪಶುಪಾಲನಾ ಇಲಾಖೆ,ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೃಷಿ ಇಲಾಖೆ, ಲೀಡ್ ಬ್ಯಾಂಕ್ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ ( ಪಿ. ಎಂ. ಎಫ್. ಎಂ.ಇ.) ಬಗ್ಗೆ ಎರಡು ದಿನಗಳ ವರೆಗೆ ರೈತರಿಗೆ ಪಶುಪಾಲನಾ ಇಲಾಖೆಯ ಸಭಾಂಗಣದಲ್ಲಿ ತರಬೇತಿ ಕಾರ್ಯಗಾರ ನಡೆಯಿತು.
ಕಾರ್ಯಗಾರಕ್ಕೆ ಚಾಲನೆಯನ್ನು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಲಿಂಗರಾಜ್ ದೊಡ್ಡಮನಿ ನೀಡಿದರು. ವೇದಿಕೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ ನಾಯಕ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ಕೃಷಿ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್, ಪಶುವೈದ್ಯ ರಾದ ಡಾ. ಶಶಿಧರ್, ಕುಶಾಲನಗರದ ಮುಖ್ಯ ಪಶುವೈದ್ಯಾಧಿಕಾರಿ ಡಾ. ಸಂಜೀವ್ ಕುಮಾರ್ ಆರ್. ಸಿಂಧೆ, ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
40. ಮಂದಿ ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆದರು.
ಪಿ.ಎಂ. ಎಫ್. ಎಂ.ಸಿ.ನ ಸಂಪನ್ಮೂಲ ವ್ಯಕ್ತಿಗಳಾಗಿ ನಿರಾಜ, ಮತ್ತು ಡಾ. ಎಂ. ಅಮೃತ ನವರು ಅಗಮಿಸಿ ಹಂದಿ ಸಾಕಾಣಿಕೆ, ಕುರಿ,ಮೇಕೆ, ಸಾಕಾಣಿಕೆ, ಶುದ್ಧ ಮಾಂಸ ಉತ್ಪಾದನೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ರೈತರಿಗೆ ಒದಗಿಸಿದರು.
ಸುಜಾತ ಪ್ರಾರ್ಥನೆ ನೆರವೇರಿಸಿ, ಡಾ. ಸಂಜೀವ್ ಕುಮಾರ್ ಆರ್.ಶಿಂಧೆ ಸ್ವಾಗತಿಸಿ, ಗಣೇಶ ವಂದಿಸಿದರು.
Back to top button
error: Content is protected !!