ಕಾರ್ಯಕ್ರಮ

SP1 MEDIA ಯೂಟೂಬ್ ಚಾನಲ್ ನ ‘ಮೂಕಯಾತನೆ’ ಆಲ್ಬಂ ಸಾಂಗ್ ಬಿಡುಗಡೆ

ಕುಶಾಲನಗರ, ನ 07:ಕೊಡಗಿನಲ್ಲಿ ಮೊದಲ ಬಾರಿಗೆ SP1 MEDIA ಎಂಬ ಯೂಟೂಬ್ ಚಾನಲ್ ನವರು ಮೂಕಯಾತನೆ ಎಂಬ ಒಂದು ಆಲ್ಬಮ್ ಹಾಡನ್ನ ಕನ್ನಿಕ ಇಂಟರ್ ನಾಷ್ನಲ್ ನಲ್ಲಿ ಕೂಡುಮಂಗಳೂರು ಗ್ರಾಮ ಪಂಚ್ಚಾಯಿತಿಯ ಉಪಾಧ್ಯಕ್ಷರಾದ ಭಾಸ್ಕರ್ ನಾಯಕ್ ಅವರು ಕೇಕ್ ಕಟ್ ಮಾಡುವ ಮುಖಾಂತರ ಹಾಡನ್ನು ಬಿಡುಗಡೆ ಮಾಡಿದರು ಈ ಸಂದರ್ಭ ಮಣಿಕಂಠ ಅವರು ಮತ್ತು ಶರತ್ ರವರು ಹಾಗು ಕೊಡಗು ರಕ್ಷಣ ವೇಧಿಕೆಯ ಹಾರಂಗಿ ಘಟಕದ ಅಧ್ಯಕ್ಷರಾದ ಬೊಳ್ತಂಡ ಸಜ್ಜನ್ ಕಿಶೋರ್ ಇನ್ನಿತರ ಕಲಾಭಿಮಾನಿಗಳು ಕಲಾಪ್ರೇಮಿಗಳು ಇದ್ದು ಈ ಒಂದು ಮೂಕಯಾತನೆ ಹಾಡನ್ನ SP 1 MEDIA ಯೂಟ್ಯೂಬ್ ಚಾನಲ್ ನಲ್ಲಿ ಬಹಳ ನಿರೀಕ್ಷೆಯಿಂದ ಭಾನುವಾರ ಬಿಡುಗಡೆ ಮಾಡಲಾಯಿತು. ಕಿರು ಚಿತ್ರದ ಡೈರೆಕ್ಟರ್, ಪ್ರೊಡ್ಯೂಸರ್ ಕ್ಯಾಮರ ಮತ್ತು ಎಡಿಟರ್ ಶಿವಪ್ರಕಾಶ್ ಡೈರೆಕ್ಷನ್ ನಲ್ಲಿ ಮೂಡಿಬಂದ ಹಾಗು ಪ್ರೊಡಕ್ಷನ್ ಕಂಟ್ರೋಲರ್ ಹಾಗು ಪೋಸ್ಟರ್ ಡಿಸೈನರ್ ಆಗಿ ಅರ್ಕೇಶ್ ಅಚ್ಚು ಕೆಲಸ ಮಾಡಿರುತ್ತಾರೆ. ಈ ಹಾಡನ್ನು ನವಿನ್ ರವರು ಬರೆದಿದ್ದು ವಿನಯ್ ಕುಂಬ್ರ ರವರು ಹಾಡಿರುತ್ತಾರೆ.

ಈ ಕಿರುಚಿತ್ರ (ಆಲ್ಬಾಮ್ ಸಾಂಗ್) ನಟ ತೀರ್ಥು ಪಡಿಕಲ್ ನಟಿ ಶ್ವೇತ ಅವರು ಎಲ್ಲರು ಸೇರಿ ಟೀಮ್ ವರ್ಕ್ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!