ಕುಶಾಲನಗರ, ನ 18: ತೊರೆನೂರು ಗ್ರಾಮದ ನೀರು ಬಳಕೆದಾರರ ಸಹಕಾರ ಸಂಘದ ಕಛೇರಿಯಲ್ಲಿ ಮಹನೀಯರ ಗೌರವಾರ್ಥ ಹಾಗೂ ಸ್ಮರಣಾರ್ಥ ಭಾವಚಿತ್ರಗಳನ್ನು ಸಂಗ್ರಹಿಸಿ ಫೋಟೋ ಫ್ರೇಮ್ ಮಾಡಿ ಅಳವಡಿಸಿರುವ ಆಡಳಿತ ಮಂಡಳಿ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.
ದೇಶದ ಪ್ರಧಾನಿ, ಮಾಜಿ ಪ್ರಧಾನಿ ಗಳು, ಕೇಂದ್ರ, ರಾಜ್ಯದ ರಾಜಕಾರಣಿಗಳುಣ ದಿವಂಗತ ಧುರೀಣರು, ಸಾಹಿತಿಗಳು, ಸಂತರು ಮತ್ತಿತರರ 60 ಕ್ಕೂ ಅಧಿಕ ಸಾಧಕ ಗಣ್ಯರ ಭಾವಚಿತ್ರ ಕಛೇರಿ ಯೊಳಗೆ ಕಾಣಬಹುದು. ಇತ್ತೀಚಿಗೆ ಗತಿಸಿದ ಸಾಲುಮರದ ತಿಮ್ಮಕ್ಕ ಭಾವಚಿತ್ರ ಕೂಡ ಇದರ ಸಾಲಿಗೆ ಸೇರ್ಪಡೆಯಾಗಿದೆ.
Back to top button
error: Content is protected !!