ಶಿಕ್ಷಣ

ನ.13 (ಇಂದು) ಗುರುವಾರ ನಳಂದ ಗುರುಕುಲ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಅತ್ಯಾಕಾರ್ಷಕ ಕಟ್ಟಡ ಲೋಕಾರ್ಪಣೆ

ಕುಶಾಲನಗರ, ನ 13:ಕುಶಾಲನಗರ ಸಮೀಪದ ಗುಡ್ಡೇನಹಳ್ಳಿ ಯಲ್ಲಿ ಸರಿ ಸುಮಾರು 50 ಎಕರೆಗೂ ಹೆಚ್ಚಿನ ವಿಶಾಲ ಪ್ರದೇಶದಲ್ಲಿ ನಿಸರ್ಗದ ಮಡಿಲಿನಲ್ಲಿ ಇರುವ ನಳಂದ ಗುರುಕುಲ ಪಬ್ಲಿಕ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಅತ್ಯಾಧುನಿಕ ಶೈಲಿಯ ಶಾಲಾ ಕಟ್ಟಡ ನಿರ್ಮಾಣಗೊಂಡಿದೆ.

ಬಹುಶಃ ಕೊಡಗು, ಮೈಸೂರು ಸುತ್ತಮುತ್ತಲಿನ ಜಿಲ್ಲೆಗಳಿಗೆ ಮಾದರಿ ಎನ್ನಬಹುದಾದ ಈ ಶಾಲಾ ಕಟ್ಟಡ ಆಗಷ್ಟೇ ಶಾಲೆಗೆ ಪಾದಾರ್ಪಣೆ ಮಾಡುವ ಪುಟ್ಟ ಮಕ್ಕಳ ಸರ್ವತೋಮುಖ ಪ್ರಗತಿಗೆ ಹಿಡಿದ ಕೈಗನ್ನಡಿ ಈ ಶಾಲಾ ಮಾದರಿ ಎಂದರೆ ಅತಿಶಯೋಕ್ತಿಯಲ್ಲ.
ಇತ್ತೀಚಿನ ಆಧುನಿಕ ಪ್ರಪಂಚದಲ್ಲಿ ಬದಲಾದ ತಂತ್ರಜ್ಞಾನದ ಅಟ್ಟಹಾಸದಲ್ಲಿ ಸಿಲುಕಿರುವ ಮಕ್ಕಳು ಹಾಗೂ ಮನುಜರು ಪೂರ್ವಿಕರು ಹೊಂದಿದ್ದ ಸಂಸ್ಕಾರ ಹಾಗೂ ಸಂಪ್ರದಾಯಗಳನ್ನು ಮರೆಯುತ್ತಿರುವ ಈ ಕಾಲಘಟ್ಟದಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಎಳೆಯ ಹಂತದಲ್ಲಿಯೇ ಸಂಸ್ಕಾರಯುತ, ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಪ್ರಮುಖ ಉದ್ದೇಶ ಹೊಂದಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಅಂಥೋಣಿ ರಾಜು ತಿಳಿಸಿದ್ದಾರೆ.
ನೂತನವಾಗಿ ನಿರ್ಮಾಣಗೊಂಡ ಶಾಲೆಯಲ್ಲಿ ಮೂಲ ಶಿಕ್ಷಣ ನರ್ಸರಿಯಿಂದಲೇ ಮಕ್ಕಳಿಗೆ ಕಲಿಸಲು ಉತ್ತಮ ಜ್ಞಾನಾರ್ಜನೆ ಯುಳ್ಳ ನುರಿತ ಶಿಕ್ಷಕರನ್ನು ಹೊಂದಲಾಗಿದೆ.
ಆಮದು ಮಾಡಿಕೊಂಡ ವಸ್ತುಗಳನ್ನು ಒಳಗೊಂಡ ಕಲಾತ್ಮಕ ಚಟುವಟಿಕೆಯ ಕೊಠಡಿಗಳು, ಉತ್ತಮ ಸಂವಹನಾ ಕೌಶಲಗಳಿಗಾಗಿ ಆಧುನಿಕ ಪರದೆಯನ್ನು ಒಳಗೊಂಡ ಅತ್ಯಾಕರ್ಷಕ ಕಲಿಕಾ ಮಂದಿರ, ಸಹಪಠ್ಯ ಚಟುವಟಿಕೆಗಳನ್ನು ನಡೆಸಲು ಅನುಗುಣವಾದ ವಿಶಾಲವಾದ ಒಳಾಂಗಣ ವೇದಿಕೆ, ಶಾಲಾ ಕಟ್ಟಡದೊಳಗೆ ಸುರಕ್ಷಿತ ವ್ಯವಸ್ಥೆಗಳನ್ನು ಹೊಂದಿದ ಆಧುನಿಕ ಹಾಗೂ ಆಕರ್ಷಕ ಈಜುಕೊಳ,
ಜೀವನ ಕೌಶಲ್ಯ ಗಳನ್ನು ಕಲಿಸುವ ಅಂದ – ಚೆಂದದ ಪ್ರಯೋಗಾಲಯ, ಡಿಜಿಟಲ್ ಕಲಿಕಾ ವ್ಯವಸ್ಥೆಯೊಂದಿಗೆ ರೋಮಾಂಚಕವಾದ ತರಗತಿ ಕೊಠಡಿಗಳು, ಉತ್ತಮ ವೈದ್ಯಕೀಯ ಸೌಲಭ್ಯಗಳು, ವಿಶ್ರಾಂತಿ ಕೊಠಡಿ ಹೀಗೆ ಹತ್ತಾರು ಮಾದರಿಗಳನ್ನು ಶಾಲಾ ಕಟ್ಟಡದೊಳಗೆ ಅನುಷ್ಠಾನಗೊಳಿಸಲಾಗಿದೆ.
ಸಂಸ್ಥೆಯ ಹೆಸರೇ ಹೇಳುವಂತೆ ಇಲ್ಲಿ ಕಲಿಯುವ ಮಕ್ಕಳು ಪೂರ್ವಜರ ಕಾಲದ ಪರಿಕಲ್ಪನೆಯಾಗಿದ್ದ ಗುರುಕುಲ ಮಾದರಿಯ ಮೌಲ್ಯಾಧಾರಿತ ಗುಣಮಟ್ಟದ ಸಮಗ್ರ ಶಿಕ್ಷಣ ಇಲ್ಲಿ ಸಾಕ್ಷಾತ್ಕಾರಗೊಳ್ಳಲಿದೆ ಎಂದು ಸಂಸ್ಥೆಯ ಛೇರ್ಮನ್ ಸಾತಪ್ಪನ್ ವಿವರಿಸಿದರು.
ಕುಶಾಲನಗರದ ಬಳಿ ಮೈಸೂರು ಜಿಲ್ಲೆಯ ಗಡಿ ಗ್ರಾಮ ಕೊಪ್ಪಾ ಗ್ರಾಪಂ ವ್ಯಾಪ್ತಿಯ ಗುಡ್ಡೇನಹಳ್ಳಿಯ ಪ್ರಕೃತಿ ರಮಣೀಯ ತಾಣದಲ್ಲಿ ಈ ಸಂಸ್ಥೆ ತೆರೆದುಕೊಂಡಿದ್ದು, ಕೊಡಗು, ಮೈಸೂರು, ಮಂಡ್ಯ, ಹಾಸನ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳ ವಿದ್ಯಾರ್ಥಿಗಳು ನರ್ಸರಿಯಿಂದ ಪಿಯು ಶಿಕ್ಷಣದ ಕಲಿಕೆಯಲ್ಲಿ ತೊಡಗಿದ್ದಾರೆ ಎಂದು ಸಾತಪ್ಪನ್ ಹೇಳಿದರು.
ನವೆಂಬರ್ 11 ರಂದು ಗುರುವಾರ ಮಧ್ಯಾಹ್ನ 12-30 ಗಂಟೆಗೆ ಸರಿಯಾಗಿ ಸುತ್ತೂರು ಮಹಾಸಂಸ್ಥಾನದ 24 ನೇ ಜಗದ್ಗುರು ಡಾ.ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಗಳು ನೂತನ ಶಾಲಾ ಸಮುಚ್ಛಯವನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!