ಪ್ರಕಟಣೆ

ಬೆಂಬಲಿಗರೊಂದಿಗೆ ಹರಪಳ್ಳಿ ರವೀಂದ್ರ ಬಿಜೆಪಿ ಸೇರ್ಪಡೆ: ರಾಜ್ಯ ನಾಯಕರ ಉಪಸ್ಥಿತಿ

ಕುಶಾಲನಗರ, ನ 15: 17/11/ 25ರ ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಸೋಮವಾರಪೇಟೆಯ ಜೆಸಿ ವೇದಿಕೆಯಲ್ಲಿ ಸಮಾಜ ದೇವಕ ಹರಪಳ್ಳಿ ರವೀಂದ್ರ ಅವರು ಕಾಂಗ್ರೆಸನ್ನು ತೊರೆದು ಬಿಜೆಪಿಯ ತತ್ವ ಸಿದ್ಧಾಂತ ಅಭಿವೃದ್ಧಿ ನಾಯಕತ್ವವನ್ನು ಮೆಚ್ಚಿ ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿಯನ್ನು ಸೇರಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿಗಳಾದ ಡಾಕ್ಟರ್ ಅಶ್ವಥ್ ನಾರಾಯಣ್, ಮಾಜಿ ಸಚಿವ ರಾದ ಅಪ್ಪಚ್ಚು ರಂಜನ್ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, mlc ಸುಜಾ ಕುಶಾಲಪ್ಪ ಜಿಲ್ಲಾ ಅಧ್ಯಕ್ಷರಾದ ರವಿ ಕಾಳಪ್ಪನವರು ಮಂಡಲ, ಅಧ್ಯಕ್ಷರಾದ ಗೌತಮ್ ಗೌಡ, ಮಾಜಿ ಎಂಎಲ್‌ಸಿಗಳಾದ ಮೇದಪ್ಪ ಹಾಗು ಸುನಿಲ್ ಸುಬ್ರಮಣಿ ಹಾಗೂ ಹತ್ತು ಹಲವು ಭಾರತೀಯ ಜನತಾ ಪಾರ್ಟಿಯ ಪ್ರಮುಖ ನಾಯಕರುಗಳು ಕಾರ್ಯಕರ್ತರುಗಳ ಸಮ್ಮುಖದಲ್ಲಿ
ಅಪಾರ ಅಭಿಮಾನಿಗಳೊಂದಿಗೆ ಬಿಜೆಪಿಗೆ ಸೇರ್ಪಡೆ ಗೊಳ್ಳುತ್ತಿರುವುದು ಸಂತೋಷದ ವಿಷಯವಾಗಿದ್ದು ಸೋಮವಾರಪೇಟೆ ಮಂಡಲದ ಎಲ್ಲಾ ಪದಾಧಿಕಾರಿಗಳು ಎಲ್ಲಾ ಕಾರ್ಯಕರ್ತರು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಸೋಮವಾರಪೇಟೆ ಮಂಡಲ ಬಿಜೆಪಿ
ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಈ ಮೂಲಕ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!