ಆರೋಪ
ಕೇರಳ ಮೂಲದ ವ್ಯಾಪಾರಿಯಿಂದ ಲಕ್ಷಾಂತರ ವಂಚನೆ: ಅಂಗಡಿಗೆ ಮುತ್ತಿಗೆ

ಕುಶಾಲನಗರ, ಡಿ 05: ಕುಶಾಲನಗರ ಪುರಸಭೆ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ವಿಜಯಲಕ್ಷ್ಮಿ ಸ್ಟೋರ್ ನಡೆಸುತ್ತಿದ್ದ ಕೇರಳ ಮೂಲದ ವಿಪಿನ್ ಎಂಬಾತ ಸಾಮಗ್ರಿಗಳನ್ನು ಪೂರೈಸುತ್ತಿದ್ದವರಿಗೆ ಲಕ್ಷಾಂತರ ರೂ ವಂಚಿಸಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಅಂಗಡಿಗೆ ಮುತ್ತಿಗೆ ಹಾಕಿದ ಸಂತ್ರಸ್ತರು ಕಟ್ಟಡ ಮಾಲೀಕರೊಂದಿಗೆ ಆಕ್ರೋಷ ವ್ಯಕ್ತಪಡಿಸಿದರು. ಸ್ಥಳೀಯ ಅಂಗಡಿಯಿಂದ ಹಾಲು ಸೇರಿದಂತೆ ಸಪ್ಲೈಯರ್ ಗಳಿಂದ ಸಾಮಾಗ್ರಿಗಳನ್ನು ಪಡೆದು ಹಣ ಪಾವತಿಸದೆ ಸುಮಾರು 10 ಲಕ್ಷಕ್ಕೂ ಅಧಿಕ ವಂಚನೆ ನಡೆಸಿರುವುದಾಗಿ ಮೋಸ ಹೋದವರು ತಿಳಿಸಿದ್ದಾರೆ.




