ಕುಶಾಲನಗರ, ಫೆ 02: ಮೈಸೂರಿನಲ್ಲಿ ನಡೆದ ಮೈಸೂರು ಓಪನ್ ಆಲ್ ಇಂಡಿಯಾ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕುಶಾಲನಗರ ತಾಲ್ಲೂಕಿನ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅಪೂರ್ವ ಸಾಧನೆ ತೋರುವ ಮೂಲಕ ಮೊದಲ ಹಾಗೂ ದ್ವಿತೀಯ ಬಹುಮಾನಗಳನ್ನು ಗಳಿಸಿ ಚಾಂಪಿಯನ್ ಗಳಾಗಿ ಹೊರ ಹೊಮ್ಮಿದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ ಹಾಗೂ ಪ್ರಾಂಶುಪಾಲೆ ಸತ್ಯ ಸುಲೋಚನಾ ಶ್ಲಾಘಿಸಿ ಅಭಿನಂದಿಸಿದರು. ಕರಾಟೆ ಶಿಕ್ಷಕರಾದ ಎಂ.ಕೆ.ಶಿವರಾಂ ಇದ್ದರು.
Back to top button
error: Content is protected !!