ಸಾಂಸ್ಕೃತಿಕ

ಸುತ್ತೂರು ಜಾತ್ರೆಗೆ ಯಾತ್ರೆ ಹೊರಟ ಕೊಡಗಿನ ಭಕ್ತಜನ

ಕುಶಾಲನಗರ, ಜ 18 : ಐತಿಹಾಸಿಕ ಸುತ್ತೂರು ಜಾತ್ರೋತ್ಸವ ದಲ್ಲಿ ಭಾಗಿಯಾಗಲು ಕೊಡಗಿನ ಭಕ್ತಗಣ ಕುಶಾಲನಗರದಿಂದ ಯಾತ್ರೆ ಹೊರಟಿತು.
ನಗರದ ಸುಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ವೀರಶೈವ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಸ್.ನಂದೀಶ್, ಕಾರ್ಯದರ್ಶಿ ಶಿವಲಿಂಗು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪರಿಷತ್ತಿನ ಪದಾಧಿಕಾರಿಗಳಾದ ಎಂ.ಎಸ್.ರಾಜಶೇಖರ್, ಹೆಚ್.ಪಿ.ರವೀಶ್, ಬಸವರಾಜು, ಕುಶಾಲನಗರ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ, ಪದಾಧಿಕಾರಿಗಳಾದ ಟಿ.ವಿ.ಶೈಲಾ, ಮನುದೇವಿ, ಟಿ.ಎಸ್.ಸೌಭಾಗ್ಯ, ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ವೀರಶೈವ ಸಮಾಜದ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೇಖನಾ ಧರ್ಮೇಂದ್ರ, ಮಮತಾ ರವೀಶ್ ಮೊದಲಾದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!