ಕೂಡಿಗೆ, ಆ. 15: ಕೂಡಿಗೆ ಕೂಡುಮಂಗಳೂರು ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 80 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಧ್ವಜಾರೋಹಣವನ್ನು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ನೆರವೇರಿಸಿ ,ದಿನದ ಮಹತ್ವದ ಬಗ್ಗೆ ಸವಿಸ್ತಾರವಾಗಿ ಮಾತಾನಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಹಕಾರ ಸಂಘ ನಿರ್ದೇಶಕರಾದ ಕೆ.ಟಿ. ಅರುಣ್ ಕುಮಾರ್, ಕೆ.ಪಿ. ರಾಜು, ರಾಮಚಂದ್ರ,
ಎಸ್. ಎಸ್ . ಕೃಷ್ಣ, ರಮೇಶ್, ಕೃಷ್ಣ ಗೌಡ, ನಾಗರಾಜ್, ಕುಮಾರ್, ಜಯಶ್ರೀ, ಪವಿತ್ರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರ್ಷ, ಸಿಬ್ಬಂದಿಗಳಾದ ಎಸ್. ಪೂರ್ಣಿಮಾ, ಚಂದ್ರಶೇಖರ್, ಪೂರ್ಣೀಮ, ಸೇರಿದಂತೆ ವಿವಿಧ ಶಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು. ಇದೇ ಸಂಧರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಣಾ ಕಾರ್ಯ ನಡೆಯಿತು.
ವೃಂದ, ಸೇರಿದಂತೆ ನೂರಾರು ಸಿಬ್ಬಂದಿ ವರ್ಗದವರು ಹಾಜರಿದ್ದರು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ, ಪ್ರೌಢಶಾಲಾ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಡೈರಿ ವತಿಯಿಂದ ಸಾವಿರಾರು ಸಿಹಿ ಹಾಲಿನ ಪ್ಯಾಕೆಟ್ ಗಳನ್ನು ವಿತರಣೆ ಮಾಡಲಾಯಿತು. ಡೈರಿ ಸಿಬ್ಬಂದಿ ಕಾಂತಾರಾಜ್ ಸ್ವಾಗತಿಸಿ ವಂದಿಸಿದರು.
Back to top button
error: Content is protected !!