ಕುಶಾಲನಗರ, ಜು 26: ರಂಗಸಮುದ್ರ ದವಸ ಭಂಡಾರಕ್ಕೆ ಸೇರಿದ ಜಾಗಕ್ಕೆ ಬೇಲಿ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಗುಡ್ಡೆಹೊಸೂರು ಗ್ರಾಪಂ ಕಟ್ಟಡ ಹಿಂಭಾಗದಲ್ಲಿರುವ ಭಂಡಾರಕ್ಕೆ ಸೇರಿದ 12 ಸೆಂಟ್ ಜಾಗವನ್ನು ಬೇಲಿ ಅಳವಡಿಸುವ ಮೂಲಕ ಸಂರಕ್ಷಿಸುವ ಕಾರ್ಯಕ್ಕೆ ಭಂಡಾರ ಆಡಳಿತ ಮಂಡಳಿ ಪದಾಧಿಕಾರಿಗಳು ಮುಂದಾಗಿದ್ದಾರೆ.
ಈ ಸಂದರ್ಭ ಮಾತನಾಡಿದ ಭಂಡಾರದ ಅಧ್ಯಕ್ಷ ಎ.ಎಂ.ಲೋಕನಾಥ್ ಅವರು, 1935 ರಲ್ಲಿ ಆರಂಭವಾದ ರಂಗಸಮುದ್ರ ಧವಸ ಭಂಡಾರದ ಅಧೀನಕ್ಕೆ ಬರುವ ಗುಡ್ಡೆಹೊಸೂರು ಗ್ರಾಮದ ಸರ್ವೆ ನಂ 14/11 ರಲ್ಲಿ 12 ಸೆಂಟ್ ಜಾಗಕ್ಕೆ ಶಾಸಕರ ಮೂಲಕ ಈಗಾಗಲೆ ದಾಖಲೆಪತ್ರ ಪಡೆದುಕೊಳ್ಳಲಾಗಿದೆ. ಅದರನ್ವಯ ಗ್ರಾಮಸ್ಥರ ಅನುಕೂಲಕ್ಕಾಗಿ ಜಾಗದ ಎರಡೂ ಬದಿಯಲ್ಲಿ 13 ಮತ್ತು 11 ಸೆಂಟ್ ಗಳಷ್ಟು ಜಾಗವನ್ನು ರಸ್ತೆ ಬಳಕೆಗೆ ಒದಗಿಸಿ ಉಳಿದ ಜಾಗಕ್ಕೆ ಬೇಲಿ ಅಳವಡಿಸಲಾಗಿದೆ. ಭಂಡಾರಕ್ಕೆ ಶಾಸಕರು ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದ್ದು ಮುಂದಿನ ದಿನಗಳಲ್ಲಿ ಈ ಜಾಗದಲ್ಲಿ ಕೆಳ ಅಂತಸ್ಥಿನಲ್ಲಿ ಗೋದಾಮು, ಮೇಲಂತಸ್ತಿನಲ್ಲಿ ವಸತಿ ಸಮುಚ್ಚಯ ನಿರ್ಮಿಸುವ ಚಿಂತನೆ ಹೊಂದಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಭಂಡಾರದ
ಉಪಾಧ್ಯಕ್ಷ ಟಿ.ಸಿ. ಶಿವಕುಮಾರ್
ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎನ್.ಕಾಶಿ, ದವಸ ಭಂಡಾರದ
ನಿರ್ದೇಶಕರಾದ ಆರ್.ಕೆ.ಚಂದ್ರ,
ಬಿ.ಎಸ್.ಧನಪಾಲ್, ಪಿ.ಎಸ್ ಬಸಪ್ಪ, ಶಿವಕುಮಾರ್
ರುದ್ರಪ್ಪ ಹೆಚ್.ಬಿ, ಸ್ಥಳೀಯ ನಿವಾಸಿ ನಾಗಣ್ಣ ಮತ್ತಿತರರು ಇದ್ದರು.
Back to top button
error: Content is protected !!