ಕುಶಾಲನಗರ, ಡಿ 07: ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಾಬ್ದಿ ವರ್ಷದ ಪ್ರಯುಕ್ತ ಮನೆ ಮನೆ ( ಗೃಹ )ಸಂಪರ್ಕ ಅಭಿಯಾನ 7-12-ರಿಂದ 28-12-25 ವರೆಗೆ ಇದೆ. ಕುಶಾಲನಗರ ತಾಲೂಕಿನ 18 ಮಂಡಲಗಳು 36 ಗ್ರಾಮಗಳಲ್ಲಿ ಇಂದಿನಿಂದ ಪ್ರಾರಂಭವಾಗಲಿದೆ ಆದ್ದರಿಂದ ಇಂದು ಬೆಳಿಗ್ಗೆ 8:00 ಗಂಟೆಗೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ರಥಬೀದಿ ಕುಶಲನಗರದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಲಾಗಿದೆ
ಪ್ರತಿ ಹಿಂದುವಿನ ಮನೆಗೆ ಭಾರತ ಮಾತೆಯ ಭಾವಚಿತ್ರ
ಸಂಘ ಪರಿಚಯ ಸಂಘ ಕಳೆದ 100 ವರ್ಷದಲ್ಲಿ ಸಮಾಜಕ್ಕೆ ಮಾಡಿರುವ ಸೇವೆಗಳ ಕುರಿತ ಪುಸ್ತಕ
ಮತ್ತು ಪ್ರಸ್ತುತ ಸಮಾಜದಲ್ಲಿ ಆಗಬೇಕಾಗಿರುವ ಪಂಚ ಪರಿವರ್ತನೆಗಳ ಮಾಹಿತಿ ಇರುವ ಕರಪತ್ರ ಈ 3 ಸಾಹಿತ್ಯ ಎಲ್ಲ ಮನೆಗಳಿಗೆ ತಲುಪಲಿದೆ ಈ ಸಂದರ್ಭದಲ್ಲಿ ಪರಿವಾರ ಸಂಘಟನೆಯ ಎಲ್ಲಾ ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಯ ಪ್ರಮುಖರು ಸಮಾಜದ ಪ್ರಮುಖರು ಮುಂದಿನ ತಿಂಗಳು ನಡೆಯುವ ಹಿಂದೂ ಸಂಗಮದ ಆಚರಣೆ ಸಮಿತಿಯ ಅಧ್ಯಕ್ಷರಾದ ಶ್ರೀದೇವಿ ಪ್ರಸಾದ್ ಕುಶಲನಗರ ಹಾಜರಿದ್ದರು
Back to top button
error: Content is protected !!