ಕುಶಾಲನಗರ, ಸೆ 29: ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಪದವಿ ಕಾಲೇಜು,ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮರೋಪ ಸಮಾರಂಭ ಜರಗಿತು.ಈ ಶಿಬಿರದ ಅಧ್ಯಕ್ಷತೆಯನ್ನು ಶ್ರೀ ಶಂಭುಲಿಂಗಪ್ಪ ರವರು ಅಧ್ಯಕ್ಷರು, ಶ್ರೀ ವಿವೇಕಾನಂದ ವಿದ್ಯಾ ಸಂಸ್ಥೆ ಇವರು ವಹಿಸಿಕೊಂಡಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ,ಸೌಮ್ಯರವರು ಹಾಗೂ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್,ಗ್ರಾಮ ಪಂಚಾಯತಿ ಸದಸ್ಯರಾದ ಉಷಾ , ಶಿಬಿರದ ಅಧಿಕಾರಿಯಾದ ಮಂಜೇಶ್, ಕಚೇರಿ ಅಧಿಕ್ಷಕರು, ಮಹೇಶ್ ಅಮೀನ್ ರವರು ಹಾಜರಿದ್ದರು. ಈ ಸಂದರ್ಭದಲ್ಲಿ ಶಂಭುಲಿಂಗಪ್ಪನವರು ಮಾತನಾಡಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ಸ್ವಚ್ಛತೆ ,ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿಕೊಟ್ಟರು
ಹಾಗೂ ಈ ಕಾರ್ಯಕ್ರಮದ ನಿರೂಪಣೆಯನ್ನು ದೀಪ್ತಿ ಡಿಸೋಜಾ, ಸ್ವಾಗತ ಮಂಜುಶ್ರೀ ,ವಂದನಾರ್ಪಣೆ ದೇವೇಂದ್ರ ನಡೆಸಿಕೊಟ್ಟರು.ಮಹಾತ್ಮ ಗಾಂಧಿ ಸ್ಮಾರಕ ಪದವಿ ಕಾಲೇಜಿನ ಉಪನ್ಯಾಸಕರು ಬೋಧಕೇತರ ವರ್ಗ ಹಾಜರಿದ್ದರು.
Back to top button
error: Content is protected !!