ಆರೋಪಟ್ರೆಂಡಿಂಗ್

ಸಿದ್ದಾಪುರದಲ್ಲಿ ಗುಂಡು‌ ಹಾರಿಸಿ ಎರಡು ಜಾನುವಾರು ಹತ್ಯೆ

ಕುಶಾಲನಗರ, ಡಿ 07:ತೋಟದೊಳಗೆ‌ ನುಗ್ಗಿದ ಎರಡು ಜಾನುವಾರುಗಳನ್ನು ನಿರ್ದಯಿ‌ ತೋಟದ ಮಾಲೀಕ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಗುಹ್ಯ ಗ್ರಾಮದಲ್ಲಿ ನಡೆದಿದೆ.
ತೋಟದ ಮಾಲೀಕ ನರೇಂದ್ರ ನಾಯ್ಡು ಎಂಬಾತ 2 ಹಸುಗಳನ್ನು ಗುಂಡಿಕ್ಕಿ ಕೊಂದಿರುವ ದುಷ್ಟ. ಗುಹ್ಯದ ಮಣಿ ಎಂಬವರಿಗೆ ಸೇರಿದ ಈ ಎರಡು ಹಸುಗಳು ಮೇಯಲು‌ ಬಿಟ್ಟಿದ್ದು ವಾಪಾಸ್ ಬಂದಿರಲಿಲ್ಲ.ಹುಡುಕಾಟದ ಸಂದರ್ಭ ಪಕ್ಕದ ತೋಟದಲ್ಲಿ ಸತ್ತು ಬಿದ್ದಿರುವ ವಿಚಾರ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಮಣಿ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ನರೇಂದ್ರ‌ನಾಯ್ಡು ವಿರುದ್ದ ದೂರು ನೀಡಿದ್ದಾರೆ. ಎಸ್ಟೇಟ್ ಮಾಲೀಕ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!