ಕುಶಾಲನಗರ, ನ 12: ಹೆಚ್. ಶಿವರಾಮೇಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಜಿಲ್ಲಾಧ್ಯಕ್ಷ ಬಿ.ಎ.ದಿನೇಶ್ ಅಧ್ಯಕ್ಷತೆಯಲ್ಲಿ ಕುಶಾಲನಗರ ಪ್ರವಾಸಿ ಮಂದಿರದಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳಿಗೆ ಕನ್ನಡ ಶಲ್ಯ ಹೊದಿಸಿ ಪ್ರಮಾಣಪತ್ರ ನೀಡಿ ಸ್ವಾಗತಿಸಿ ಪದಗ್ರಹಣ ನೆರವೇರಿಸಲಾಯಿತು.
ಮಡಿಕೇರಿ ತಾಲೂಕು ಗೌರವಾಧ್ಯಕ್ಷರಾಗಿ ಹೆಚ್.ಎಸ್. ನಾಗರಾಜ್, ಅಧ್ಯಕ್ಷರಾಗಿ ಎಸ್.ಅರುಣ್ ಕುಮಾರ್, ಕೊಡಗು ಜಿಲ್ಲಾ ಮಹಿಳಾ ಉಪಾಧ್ಯಕ್ಷೆಯಾಗಿ ಸೌಮ್ಯ ಮಂಜುನಾಥ್ ಮತ್ತಿತರರಿಗೆ ಪದಗ್ರಹಣ ನೆರವೇರಿಸಲಾಯಿತು. ಇದೇ ಸಂದರ್ಭ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ 25 ಮಂದಿ ಕರವೇ ಗೆ ಸೇರ್ಪಡೆಯಾದರು.
ಈ ಸಂದರ್ಭ
ಜಿಲ್ಲಾ ಸಂಚಾಲಕ ಗೋವಿಂದರಾಜ ದಾಸ್, ಜಿಲ್ಲಾ
ಗೌರವಾಧ್ಯಕ್ಷ ಕೆ ಚಂದ್ರು, ಉಪಾಧ್ಯಕ್ಷ ವಿ.ಎಸ್.ರಾಜಶೇಖರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಮುರುಗೇಶ್, ಉಪಾಧ್ಯಕ್ಷೆ ಸರಳರಾಮಣ್ಣ, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಶಿವು, ಗೌರವಾಧ್ಯಕ್ಷ ಪ್ರಕಾಶ್ ಪುಟ್ಟ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.
Back to top button
error: Content is protected !!