ಕುಶಾಲನಗರ, ಮಾ 01: ಕಾವೇರಿ ನೀರಾವರಿ ನಿಮಗದ ವತಿಯಿಂದ ಹಾರಂಗಿ ಎಡದಂಡೆ ನಾಲೆ ಮುಖ್ಯನಾಲಾ ಸರಪಳಿ ಹಾಗೂ ವಿತರಣಾ ನಾಲೆಯ ಆಯ್ದ ಭಾಗಗಳಲ್ಲಿ ಆಧುನೀಕರಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.
ಒಟ್ಟು 123 ಕೋಟಿ ವೆಚ್ಚದ ಆಧನೀಕರಣ ಕಾಮಗಾರಿಗೆ
ತೊರೆನೂರಿನಲ್ಲಿ ಶಾಸಕರು ಚಾಲನೆ ನೀಡಿದರು.
ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೆಪಿಸಿಸಿ ಸಂಯೋಜಕ ನಟೇಶ್ ಗೌಡ, ಮುಖಂಡರಾದ ಕೆ.ಎಸ್.ಕೃಷ್ಣೇಗೌಡ, ಟಿ.ಬಿ.ಜಗದೀಶ್, ಟಿ.ಕೆ. ಪಾಂಡುರಂಗ, ಎಸ್.ಎಸ್.ಚಂದ್ರಶೇಖರ್, ರಾಜಶೇಖರ್ ತಹಸೀಲ್ದಾರ್ ಕಿರಣ್ ಜಿ ಗೌರಯ್ಯ, ನೀರು ಬಳಕೆದಾರರ ಸಹಕಾರ ಸಂಘಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಸಲಹಾ ಸಮಿತಿ ಸದಸ್ಯರುಗಳು, ಪಕ್ಷದ ವಿವಿಧ ಘಟಕಗಳ ಪ್ರಮುಖರು, ಮಾಜಿ ಜನಪ್ರತಿನಿಧಿಗಳು, ಅಧಿಕಾರಿಗಳು, ಕಾರ್ಯಕರ್ತರು ಇದ್ದರು.
Back to top button
error: Content is protected !!