ಕಾರ್ಯಕ್ರಮ
ಚಿಕ್ಕತ್ತೂರು ಗ್ರಾಮದ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಕ್ಯಾಲೆಂಡರ್ ಬಿಡುಗಡೆ


ಕುಶಾಲನಗರ, ಜ 01:ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಹಾಗೂ ವಾರ್ಷಿಕೋತ್ಸವವನ್ನು ಗ್ರಾಮ ದೇವತೆಯಾದ ಶ್ರೀ ಕನ್ನಿಕ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ನಡೆಸಲಾಯಿತು. ಕ್ಯಾಲೆಂಡರ್ ಬಿಡುಗಡೆಯನ್ನು ಚೇತನ್ ಗಸ್ತು ಅರಣ್ಯಪಾಲಕರು ಹಾಗೂ ಗ್ರಾಮದ ಮಂದಣ್ಣ ದಂಪತಿಯವರು ನೆರವೇರಿಸಿದರು ಕಾರ್ಯಕ್ರಮದಲ್ಲಿ ಅರಣ್ಯ ರಕ್ಷಕ ದಿಲೀಪ್, ಸಂಘದ ಗೌರವಾಧ್ಯಕ್ಷ ಯೋಗೇಂದ್ರನ್, ಅಧ್ಯಕ್ಷ ಸ್ವಾಮಿ ಸಿ. ಸಿ. ಉಪಾಧ್ಯಕ್ಷ ಕೃಷ್ಣ ಸಿ.ಎನ್. ಕಾರ್ಯದರ್ಶಿ ಕುಮಾರಸ್ವಾಮಿ, ಸಹ ಕಾರ್ಯದರ್ಶಿ ಅನು ಕುಮಾರ್ ಹಾಗೂ ಸರ್ವ ಸದಸ್ಯರು ಭಾಗಿಯಾಗಿದ್ದರು.