ಕುಶಾಲನಗರ, ಅ 22: ಕುಶಾಲನಗರ ತಾಲೂಕು ಸಾಮರಸ್ಯ ವೇದಿಕೆ ವತಿಯಿಂದ ದೀಪಾವಳಿ ಪ್ರಯುಕ್ತ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ, ವಿರುಪಾಕ್ಷಪುರ, ಸಿರಾಜಳ್ಳ ಹಾಗೂ ಹೊಸಪಟ್ಟಣ ಗ್ರಾಮದಲ್ಲಿ ಸಾಮರಸ್ಯ ದೀಪಾವಳಿ ಆಚರಣೆ ನಡೆಸಲಾಯಿತು.
ವೇದಿಕೆಯ ಪದ್ಮ ಹಾಗೂ ಶಾಂತಕುಮಾರ ದಂಪತಿಗಳು ಗೋವು ಪೂಜೆ ಮಾಡಿ ಬಸವೇಶ್ವರ ದೇವಸ್ಥಾನದ ಗರ್ಭಗುಡಿಯಿಂದ ದೀಪದೊಂದಿಗೆ ಮೆರವಣಿಗೆ ಮೂಲಕ ಬಂದು ಅಂಬೇಡ್ಕರ್ ಕಾಲೋನಿಯಲ್ಲಿ ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗ್ರಾಮಗಳ ದಲಿತ ಬಂಧುಗಳ ಜೊತೆಯಲ್ಲಿ ಊರಿನ ಪ್ರಮುಖರು ಮತ್ತು ವಿವಿಧ ಸಮುದಾಯಗಳ ಮುಖಂಡರ ನೇತೃತ್ವದಲ್ಲಿ ಸಾಮರಸ್ಯದ ಜ್ಯೋತಿಯನ್ನು ಮನೆಮನೆಗಳಲ್ಲಿ ಬೆಳಗಿಸಿ ಸಹಭೋಜನದಲ್ಲಿ ತೊಡಗಿಸಿಕೊಂಡು ಬಂಧುತ್ವದ ಮಹತ್ವ ಎತ್ತುಹಿಡಿಯಲಾಯಿತು.
ಮಂಗಳೂರು ವಿಭಾಗದ ಸಾಮರಸ್ಯ ವೇದಿಕೆ ಸಹ ಸಂಯೋಜಕ
ಶಿವಪ್ರಸಾದ್ ಮಾತನಾಡಿ,
ವಿಜ್ಞಾನ ತಂತ್ರಜ್ಞಾನ ಎಲ್ಲದರಲ್ಲೂ ಭಾರತ ಮುಂದುವರಿದಿದೆ. ಆದರೂ ಅಸ್ಪೃಶ್ಯತೆ ಇನ್ನೂ ಭಾರತದಲ್ಲಿ ತೊಲಗಲಿಲ್ಲ. ವ್ಯಕ್ತಿಗತ ಪರಿವರ್ತನೆಗಾಗಿ ಸಂಘಟನೆ ನೂರು ವರ್ಷದಿಂದ ಈ ರೀತಿ ಕಾರ್ಯಕ್ರಮಗಳ ಮೂಲಕ ಪ್ರಯತ್ನ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವೇದಿಕೆ ಪ್ರಮುಖ ಡಾ.ಉದಯ್ ಕುಮಾರ್ ಉಪಸ್ಥಿತರಿದ್ದರು.
ಜಿಲ್ಲಾ ಸಂಯೋಜಕರಾದ ಹರೀಶ್ ತಮ್ಮಯ್ಯ, ನಂಜರಾಯಪಟ್ಟಣ ಗ್ರಾಪಂ ಸದಸ್ಯ
ರಕ್ಷಿತ್ ಮಾವಜಿ, ಗೋ ಸೇವಾ ಪ್ರಮುಖ ಪ್ರದೀಪ್, ರಮೇಶ್ ಬೊಟ್ಟು ಮನೆ, ವಿಭಾಗ ಸಂಸ್ಕೃತ ಭಾರತಿ ಪ್ರಮುಖ ಮಧುಸೂದನ್, ಪರ್ಯಾವರಣ ಸಂಯೋಜಕ್ ಜನಾರ್ಧನ್, ಲೆಕ್ಕ ಪರಿಶೋಧಕ ದೇವಿ ಪ್ರಸಾದ್ ಮತ್ತು ಸಾಮರಸ್ಯ ವೇದಿಕೆ ಕಾರ್ಯಕರ್ತರಾದ ಅರುಣ್, ಕಿರಣ್, ನಿತನ್,ಪ್ರತಾಪ್, ಯೋಗೇಶ್, ಗಿರಿ, ಹರಿನೇಶ್, ಚಂದ್ರು, ವಿಶ್ವ, ಸಂದೇಶ್, ಪರ್ಲಕೋಟಿ ಕಿರಣ್, ಪವನ್ ದೇರಳ,ರದೀಶ್ ಹಾಗೂ ದಲಿತ ಬಂಧುಗಳು ಮತ್ತು ಊರಿನ ಪ್ರಮುಖರು, ಮಾತೆಯರು ಉಪಸ್ಥಿತರಿದ್ದರು.
Back to top button
error: Content is protected !!