ಪ್ರತಿಭೆ

ಕೃಷಿ ವಿಶ್ವವಿದ್ಯಾಲಯದಲ್ಲಿ ತೃತೀಯ ಶ್ರೇಣಿ ಪಡೆದ ಸಹಕಾರ ಸಂಘದ ಸಿಬ್ಬಂದಿಗೆ ಗೌರವ ಸಮರ್ಪಣೆ

ಕೂಡಿಗೆ, ಜು. 31: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾರಾಟ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎ. ಜೆ. ಪೂರ್ಣಿಮಾ ರವರು ಗೋಣಿಕೊಪ್ಪ ಕೃಷಿ ವಿಶ್ವವಿದ್ಯಾಲಯದ ಡಿಪ್ಲೊಮಾ ಇನ್ ಅಗ್ರಿಕಲ್ಚರಲ್ ಎಕ್ಸ್ಟೆನ್ಶನ್ ಸರ್ವೀಸಸ್ ಫಾರ್ ಇನ್‌ಪುಟ್ ಡೀಲರ್ಸ್ ತರಬೇತಿಯಲ್ಲಿ ತೃತೀಯ ಶ್ರೇಣಿಯನ್ನು (3 ನೇ ರಾಂಕ್ಯ್) ಪಡೆದಿರುತ್ತಾರೆ. ಅವರಿಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್, ಉಪಾಧ್ಯಕ್ಷ ವಿ. ಬಸಪ್ಪ, ನಿರ್ದೇಶಕರಾದ ಕೆ.ಟಿ.ಅರುಣ್ ಕುಮಾರ್, ಕೆ.ಪಿ.ರಾಜು ಎಸ್ ‌ಎಸ್.ಕೃಷ, ರಾಮಚಂದ್ರ, ರಮೇಶ್ ನಾಗರಾಜು ,ಎಸ್. ಆರ್. ಅರುಣ್ ರಾವ್, ಜಯಶ್ರೀ, ಕೃಷ್ಣೇಗೌಡ, ಕುಮಾರ್, ಪಲ್ಲವಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರ್ಷ, ಸಂಘದ ಮೇಲ್ವಿಚಾರಕ, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!