ಕುಶಾಲನಗರ, ಸೆ 03: ಕುಶಾಲನಗರಕ್ಕೆ ಆಗಮಿಸಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಪಾದಪೂಜೆ ಕಾರ್ಯಕ್ರಮ ಪುರಸಭೆ ಸದಸ್ಯ ಜಿ.ಬಿ.ಜಗದೀಶ್ ಅವರ ನಿವಾಸದಲ್ಲಿ ನೆರವೇರಿಸಲಾಯಿತು.
ಜಗದೀಶ್ ಕುಟುಂಬದ ವತಿಯಿಂದ ಅವರ ನಿವಾಸದಲ್ಲಿ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದುಕೊಳ್ಳಲಾಯಿತು.
ಈ ಸಂದರ್ಭ ಮಹಾಸಂಸ್ಥಾನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಪುರಸಭೆ ಸದಸ್ಯ ನವೀನ್ ಗೌಡ, ಒಕ್ಕಲಿಗರ ಸಂಘದ ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಜೈರಾಜ್, ಹೇಮಕುಮಾರ್, ರವಿ, ರಾಮಚಂದ್ರ, ಸುಮನ್ ಮತ್ತಿತರರು ಇದ್ದರು.
Back to top button
error: Content is protected !!